top of page

ಕರುನಾಡು

  • Writer: ಅವಿನಾಶ್‌ ಲಕ್ಷ್ಮಯ್ಯ
    ಅವಿನಾಶ್‌ ಲಕ್ಷ್ಮಯ್ಯ
  • Oct 31, 2024
  • 1 min read

ನಮ್ಮ ನಾಡಿದು ನಮ್ಮದು

ಚೆಲುವ ಕನ್ನಡ ನಾಡಿದು..

ಕಲೆ ಸಂಸ್ಕೃತಿ ಹಿರಿಮೆ ಮೆರೆದ

ಕನ್ನಡಿಗರ ನಾಡಿದು..


ಗಂಗ ಮೌರ್ಯ ಕದಂಬ ಹೊಯ್ಸಳ

ಚಾಲುಕ್ಯರಾಳಿದ ನಾಡಿದು..

ಕಲ್ಲ ಗರ್ಭದಿ ಕಮಲವರಳಿದ

ಶಿಲ್ಪ ಕಲೆಯಾ ಬೀಡಿದು..

ಮರೆಯಲಾಗದು ಸಿರಿಯ ಚೆಲ್ಲಿದ

ವಿಜಯನಗರದ ವೈಭವ..

ನಾಡ ಘನತೆಯ ಸಾರಿ ಹೇಳುವ

ನಮ್ಮ ದಸರೆಯ ಕಲರವ..


ಧೈರ್ಯ ಸಾಹಸ ಗುಣಗಳೆಲ್ಲವು

ತುತ್ತು ಅನ್ನದಿ ಬೆರೆತಿವೆ..

ನಿಷ್ಟೆ ಪ್ರೇಮ ಶಾಂತಿ ದಯೆಯು

ತಾಯ ಹಾಲೊಳೆ ಬಂದವೆ..

ಮುಗಿಲ ಹೊಸಿಲಲಿ ಬಾಗಿ ನಿಂತಿದೆ

ಹಸಿರ ಕಾನನ ಬಿಲ್ಲಿದು..

ಸಹ್ಯಾದ್ರಿ ಸಾಲನು ಸವರಿ ಸಾಗಿದೆ

ತಿಳಿ ನೀಳ ನೀರಲಿ ಬೆರೆತದು..


ಬಣ್ಣ ಬಣ್ಣದ ಒಳಗು ಒಂದಿದೆ

ಹಿರಿಯರಾಡಿದ ಮಾತದು..

ಕುವೆಂಪು ಬೇಂದ್ರೆ, ಮಾಸ್ತಿ ಕಾರಂತರು

ಕಲಿಸಿ ಹೇಳಿದ ನುಡಿಯದು..

ದಾಸ ಶರಣರು ಸಂತರೆಲ್ಲರು

ಹರಸಿ ಹಾಡಿದ ನಾಡಿದು..

ಎಲ್ಲರೊಂದೇ ಎನ್ನೋ ತತ್ವವ

ಇಂದೂ ಪಾಲಿಸೊ ಮಣ್ಣಿದು..


ಹಾಡೊ ಕೋಗಿಲೆ ಕಂಠಕೊಂದು

ಕವಿಯ ಸಾಲಿಹುದಿಲ್ಲಿ..

ಮನೆ ಮನವು ತುಂಬುವಂತೆ

ಕನ್ನಡದ ಮಳೆಯಾಗಲಿ..

ನಮ್ಮ ನಾಡಿದು ನಮ್ಮದು

ಚೆಲುವ ಕನ್ನಡ ನಾಡಿದು..

ಮುದ್ದು ಭಾಷೆಯ ಸವಿಯ ಉಣಿಸುವ

ಕನ್ನಡಾಂಬೆಯ ಮಡಿಲಿದು..

Recent Posts

See All
ಕೋಲಾಹಲ

ಕುತೂಹಲಯೊಂದಿದೆ ನನಗೆ.. ಹೂವಿನೆದೆಯಲು ಮೂಡುವುದೆ, ಸಿಹಿಯಾದ ಕೋಲಾಹಲ..? ದುಂಬಿಯೊಂದು ಕಿವಿಯಲಿ ಪಿಸುಗುಟ್ಟಿದಾಗ..? ಪ್ರಣಯದಾಲಿಂಗನದ ಕುರುಹು ಮೂಡಿದಾಗ..? ಮಧುರ ಚುಂಬನದಾಲೋಚನೆ ಅಧರಕೆ ಹತ್ತಿರವಾದಾಗ.. ಸುತ್ತಲಿನ ತಂಗಾಳಿ ಸುಡತ ನಡುಗಿಸುವಾಗ..

 
 
 
ಜುಮುಕಿ

ಹಿಂಬಾಲಿಸಿ ನೆಡೆದಿದೆ ಮನಸು ಕರೆವ ಆ ಜುಮುಕಿಯ ಹಿಂದೆ.. ಬರಿಯೆ ಅಂದಕೆ ತೊಟ್ಟಿರುವೆಯ ಅದನು ನನಗದೇ ಶಂಕೆ.. ನಿನ್ನೆಲ್ಲಾ ಮುಗುಳುನಗೆಯ ವಿವರಿಸಿ, ವರ್ಣಿಸುವ...

 
 
 
ಅವಳ ಒಲವೇ ಹಾಗೆ…

ಅವಳ ಒಲವೇ ಹಾಗೆ… ನಾಜೂಕಾಗಿ ಪೋಣಿಸಿದ ಕಾವ್ಯದ ಹಾಗೆ.. ಹೇಳುವುದೆಲ್ಲವ ಬಚ್ಚಿಟ್ಟ ಮೌನದ ಹಾಗೆ.. ಆತುರದ ಕಂಗಳ ಹುಡುಕಾಟದ ಹಾಗೆ.. ಬೆಚ್ಚಿ ನಡುಗುವ ಬಿಸಿಯುಸಿರ ಹಾಗೆ.....

 
 
 

Comments


Subscribe here to get my latest posts

©2024 Powered by Wix

    bottom of page